
ಎಲ್ಲಾ ರೈತ ಬಾಂಧವರಿಗೆ ನನ್ನ ನಮಸ್ಕಾರಗಳು, ನಿಮಗೆಲ್ಲಾ ತಿಳಿದಿರುವ ಹಾಗೆ, ಯಾವುದೇ ಕೃಷಿಗೆ ಸಂಬಂಧಿಸಿದ ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದರೆ ಹೊಲದ ಉತಾರವು ಬೇಕೇ ಬೇಕು. ಹಿಂದೆ ಇದೇ ಉತಾರ ತೆಗೆಯಬೇಕೆಂದರೆ ನಾವು ಸರ್ಕಾರಿ ಕಚೇರಿಗೆ ಹೋಗಿ ಗಂಟೆಗಟ್ಟಲು ಕುಳಿತು ತೆಗೆಸಬೇಕಾಗಿತ್ತು. ಆದರೆ ಈಗ ನೀವು ಕೇವಲ ಒಂದೇ ನಿಮಿಷದಲ್ಲಿ ನಿಮ್ಮ ಮೊಬೈಲಿನಲ್ಲಿ ನಿಮ್ಮ ಹೊಲದ ಉತಾರವನ್ನು ಪಡೆಯಬಹುದು.
ಹೌದು ಮಿತ್ರರೇ , ನೀವು ಈಗ ನಿಮ್ಮ ಮೊಬೈಲಿನಲ್ಲಿ ಉಚಿತವಾಗಿ ನಿಮ್ಮ ಹೊಲದ ಪಹಣಿ ಅಥವಾ ಉತಾರವನ್ನು ತೆಗೆದುಕೊಳ್ಳಬಹುದು. ಹೇಗೆ ಎಂದು ತಿಳಿಯೋಣ ಬನ್ನಿ
ಈ ಪಹಣಿಯಲ್ಲಿ ಅಥವಾ ಉತಾರದಲ್ಲಿ ಹೊಲದ ಸರ್ವೆ ನಂಬರ್, ವಿಸ್ತೀರ್ಣ ಮತ್ತು ಎಷ್ಟು ಜನ ವಾರಸ್ದಾರ್ ಇದ್ದಾರೆ ಎಂಬ ಮಾಹಿತಿಯನ್ನು ಪಡೆಯಬಹುದು.
ಮೊಬೈಲ್ ನಲ್ಲಿ ಉತಾರವನ್ನು ತೆಗೆಯುವುದು ಹೇಗೆ?
ಹಂತ 1, ಭಾರತ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ನೀವು ಭೇಟಿ ನೀಡಬೇಕು 👇
https://landrecords.karnataka.gov.in/Service2/
ಹಂತ 2 ನಂತರ current year ಮೇಲೆ ಕ್ಲಿಕ್ ಮಾಡಿ
ಹಂತ 3 ನಂತರ ಅಲ್ಲಿ ಕೇಳಿದಂತ ಎಲ್ಲ ಮಾಹಿತಿ ಅಂದರೆ ಜಿಲ್ಲೆ,ತಾಲೂಕು,ಹೊಬಳಿ,ಗ್ರಾಮವನ್ನು ಆಯ್ಕೆ ಮಾಡಿ ಸರ್ವೆ ನಂಬರ್ ಹಾಕಿ “Go” ಮೇಲೆ ಕ್ಲಿಕ್ ಮಾಡಿ
ಹಂತ 4 ನಂತರ ಸರ್ ನಾಕ್,ಹಿಸ್ಸಾ ನಂಬರ್,ಅವಧಿ ಮತ್ತು ವರ್ಷ ಆಯ್ಕೆ ಮಾಡಿ, “ವಿವರಗಳನ್ನು ಕರೆತರು” ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಉತಾರ “ವಿಕ್ಷಣೆ”ಗೆ ಲಭ್ಯವಾಗುತ್ತದೆ.
ಕೊನೆಯ ಪುಟದಲ್ಲಿ ನೀವು ಯಾವ ಬ್ಯಾಂಕಿನಲ್ಲಿ ಎಷ್ಟು ಲೋನ್ ಅನ್ನು ಪಡೆದಿದ್ದೀರಿ ಎಂಬುದನ್ನು ಸುಲಭವಾಗಿ ವೀಕ್ಷಿಸಬಹುದು
ಈ ರೀತಿ ನೀವು ಯಾವುದೇ ಕಷ್ಟವಿಲ್ಲದೆ, ಖರ್ಚಿಲ್ಲದೆ ಮನೆಯಲ್ಲಿ ಕುಳಿತು ನಿಮ್ಮ ಮೊಬೈಲಿನಲ್ಲಿ ಕೇವಲ ಒಂದೇ ನಿಮಿಷದಲ್ಲಿ ಪಹಣಿಯನ್ನು ತೆಗೆಯಬಹುದು.
link
http://www.landrecords.karnataka.gov.in
*ಈ ಆನ್ಲೈನ್ ಪಹಣಿಯಿಂದ(landrecords )ಏನು ಉಪಯೋಗ?*
ಪ್ರತಿಯೊಬ್ಬರೂ ಭೂಮಿಯನ್ನು ಕರೆಯಿರಿ ಮಾಡುವ ಮೊದಲು ಪಾನಿಯನ್ನು ಸರಿಯಾದ ರೀತಿಯಲ್ಲಿ ಪರಿಶಿಸಬೇಕು, ಕೆಲವೊಮ್ಮೆನಿಮ್ಮನ್ನು ಮೋಸ ಮಾಡಲು ನಕಲಿ ಪಾಣಿಯನ್ನು ವ್ಯಾಪಾರಸ್ಥರು ತೋರಿಸುತ್ತಾರೆ ನೀವು ಅವರು ಕೊಟ್ಟಿರುವಂತಹ ಪಾಣಿಯನ್ನು ಮೇಲೆ ವಿವರಿಸಿ ದಂತಹ ಲಿಂಕಿನ ಮೇಲೆ ಪ್ರೆಸ್ ಪಾಣೆಯನ್ನು ತೆಗೆದುಕೊಂಡು ಪರೀಕ್ಷಿಸಿ .
*ಪಹಣಿಯಲ್ಲಿರುವಂತ ಕೆಲವು ಮುಖ್ಯಾಂಶಗಳು*
ಸರ್ವೇ ಸಂಖ್ಯೆ,ಹಿಸ್ಸಾ, ಮಣ್ಣು, ಯಾವ ಬೆಳೆಯನ್ನು ಬೆಳೆಯಲಾಗಿದೆ.
ಬಹು ಮುಖ್ಯವಾಗಿ ಆ ಜಮೀನಿನ ಮೇಲೆ ಯಾವುದಾದರೂ ಸಾಲವನ್ನು ತೆಗೆದುಕೊಂಡಿದ್ದಾರೆ ಪಾನಿಯಲ್ಲಿ ತೋರಿಸುತ್ತದೆ.
ಯಾವುದೇ ರೀತಿಯಾದಂತಹ ಭೂಮಿಯ ಡಿಸ್ಪ್ಯೂಟ್ ಕೋರ್ಟಿನಲ್ಲಿ ಇದ್ದರೆ ಪಹಣಿಯಲ್ಲಿ ತೋರಿಸುತ್ತದೆ, ಮತ್ತು ಯಾವ ಕಾರಣಕ್ಕಾಗಿ ಕೋರ್ಟ್ ಸ್ಟೇ ಮಾಡಿದ್ದೆ ಎಂಬುದನ್ನು ತಿಳಿಯದು.
ಸರ್ವೇ ಸಂಖ್ಯೆ ಎಂದರೇನು – ಅದರ ಭೌತಿಕ ಗುರುತಿಸುವಿಕೆಗಾಗಿ ಒಂದು ನಿರ್ದಿಷ್ಟ ಭೂಮಿಗೆ ಒಂದು ವಿಶಿಷ್ಟ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ
ಆರ್ಟಿಸಿಯಲ್ಲಿ ಹಿಸ್ಸಾ ಎಂದರೇನು?