class="post-template-default single single-post postid-20 single-format-standard wp-embed-responsive theme-newsup woocommerce-no-js ta-hide-date-author-in-list" >
Spread the love

ಪ್ರಿಯ ರೈತರೆ ನಾವು ಈಗ ಮೊಬೈಲ್ ನಲ್ಲಿ ಆಧಾರ ಸಂಖ್ಯೆಯಿಂದ ಬೆಳೆಹಾನಿ ಪರಿಹಾರವನ್ನು ಹೆಗೆ ಪರಿಶಿಲನೆ ಮಾಡಬಹುದು ಎಂದು ತಿಳಿಯೋಣ. ಮೊದಲಿಗೆ ಗುಗಲ್ ಅಲ್ಲಿ ಬೆಳೆ ಹಾನಿ ಪರಿಹಾರ 2022 /parihar payment ಎಂದು ಟಾಇಪ್ ಮಾಡಿ ನಂತರ ಮೇಲ್ಕಂಡ ಚಿತ್ರದಲ್ಲಿ ನಿಮಗೆ ಎರಡು ಆಯ್ಕೆಗಳಿರುತ್ತವೆ, ನಿಮಗೆ ಪರಿಹಾರ ಐಡಿ ಗೊತ್ತಿದ್ದಲ್ಲಿ ಅದರ ಮೇಲೆ ಕ್ಲಿಕ್ ಮಾಡಿ ಇಲ್ಲವಾದಲ್ಲಿ ಆಧಾರ್ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ ಮುಂದೆ ಬಟನ್ ಒತ್ತಿ.
ಅಲ್ಲಿ ನಿಮಗೆ ಹಲವಾರು ಆಯ್ಕೆಗಳಿವೆ ಇರುತ್ತವೆ. ಅದರಲ್ಲಿ ಯಾವ ಕಾರಣದಿಂದ ಬೆಳೆ ಹಾನಿಯಾಗಿದೆ ಎಂಬುದನ್ನು ನಮೂದಿಸಿ. ನಂತರ ವರ್ಷವನ್ನು ಆಯ್ಕೆ ಮಾಡಿ. ನಂತರ ಆಧಾರ್ ಸಂಖ್ಯೆಯನ್ನು ನಮೂದಿಸಿ
Catchpa ಕೋಡ್ ಟೈಪ್ ಮಾಡಿ, ಮುಂದೆ ಒತ್ತಿ
ನಿಮ್ಮ ಪರಿಹಾರ ಹಣ ಸಂದಾಯದ ಸ್ಥಿತಿಯನ್ನು ನೋಡಬಹುದು. ಹಣ ಜಮಾ ಆಗಿದ್ದರೆ ನಿಮ್ಮ ಮಾಹಿತಿಯೆಲ್ಲಾ ಅಲ್ಲಿ ನಿಮಗೆ ಸಿಗುತ್ತದೆ, ಇಲ್ಲವಾದಲ್ಲಿ payment not made ಎಂದು ತೋರಿಸುತಿದ್ದೆ.
ರಾಷ್ಟ್ರೀಯ ವಿಪತ್ತು ಪರಿಹಾರ ಮಾರ್ಗಸೂಚಿಯ ಪರಿಹಾರದ ಜೊತೆಗೆ ರಾಜ್ಯ ಸರ್ಕಾರದಿಂದಲೂ ಹೆಚ್ಚುವರಿ ಪರಿಹಾರ ನೀಡಲಾಗುತ್ತದೆ. ಕಳೆದ ವರ್ಷದಂತೆ ವಿತರಿಸಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದರು.

ಪ್ರಿಯ ರೈತ ಬಾಂಧವರೇ, ಅತಿವೃಷ್ಟಿಯ ಕಾರಣದಿಂದಾಗಿ ರೈತರ ಬೆಳೆಗಳೆಲ್ಲ ಹಾನಿಯಾಗಿದ್ದು, ರೈತರಿಗೆ ತುಂಬಾ ತೊಂದರೆ ಉಂಟಾಗಿದೆ. ಅವರಿಗೆ ರಾಜ್ಯ ಸರ್ಕಾರವು ‌ರೈತನಿಗೆ ನೆರ‌‌ವಾಗಲು ಪರಿಹಾರವನ್ನು ಘೋಷಿಸಿದ್ದು,, ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ರೈತರ ಖಾತೆಗಳಿಗೆ ಹಣ ಜಮಾ‌ ಕೂಡ ಆಗಿದ್ದು ಉಂಟು. ಇನ್ನು ಕೆಲವೊಂದು ಜಿಲ್ಲೆಗಳಲ್ಲಿ ಶೀಘ್ರದಲ್ಲೇ ಹಣವು ಜಮಾ ಮಾಡಬಹುದು ಕೆಲಸ ಪ್ರಗತಿಯಲ್ಲಿದೆ, ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲಾ ಜಿಲ್ಲೆಗಳ ರೈತರ ಖಾತೆಗಳಿಗೆ ಹಣ ಜಮೆಯಾಗಲಿದೆ.
ಬೆಳೆ ಪರಿಹಾರ ಹಣದ ಸ್ಟೇಟಸ್ ಅನ್ನು ರೈತರು ತಮ್ಮ ತಮ್ಮ ಮೊಬೈಲ್ ನಲ್ಲಿ ಪರಿಶೀಲನೆ ಮಾಡಬಹುದು. ರೈತ ತನ್ನ ಮೊಬೈಲ್ನಲ್ಲಿ ಆಧಾರ್ ನಂಬರ್ ಹಾಕುವ ಮೂಲಕ ಸ್ವತಃ ತಾವೆ ಚೆಕ್ ಮಾಡಬಹುದು, ಹಾಗಾದರೆ ಇದನ್ನು‌ ಹೇಗೆ ಪರಿಶಿಲನೆ ಮಾಡಿಕೊಳ್ಳುವುದು ಎಂದು ಈಗ ಆಗಲೆ ಮೇಲೆ ತಿಳಿಹಿಸಿ ಕೊಟ್ಟು ಕೊಟ್ಟಿದೆ. ಈಗ ಎಷ್ಟು ಪರಿಹಾರದ ಹಣ ಜಮೆಯಾಗಲಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ.
ಒಣ ಭೂಮಿ – ಆಶ್ರಿತ ರೈತರಿಗೆ ಪ್ರತಿ ಹೆಕ್ಟರೆಗೆ 13,500 ರೂಪಾಯಿಗಳು ಮಳೆಯಾಶ್ರಿತ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್‌ಗೆ ಎನ್ ಡಿಆರ್‌ಎಫ್ ನಿಯಮದ ಅನುಸಾರವಾಗಿ ಒಣಭೂಮಿಗೆ ಹೆಕ್ಟೇರ್‌ಗೆ 6,800 ರೂ. ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 6,800 ರೂ. ಸೇರಿಸಿ 13,500 ರೂ. ನೀಡಲಾಗುತ್ತದೆ. ಪ್ರತಿಯೊಬ್ಬ ರೈತನಿಗೆ ಅಂದರೆ ಒಂದು ಖಾತೆಗೆ ಗರಿಷ್ಠ ಎರಡು ಹೆಕ್ಟರ್ಗಳವರೆಗೆ ಪರಿಹಾರ ಹಣವನ್ನು ನೀಡಲಾಗುತ್ತದೆ. ನೀರಾವರಿ‌ ಭೂಮಿ – ಪ್ರತಿ ಹೆಕ್ಟರ್ ಗೆ 25,000 ರೂಪಾಯಿಗಳು ನೀರಾವರಿ ಜಮೀನಿನ ಬೆಳೆ ಹಾನಿಗೆ ಎನ್ ಡಿಆರ್‌ಎಫ್ ನಿಯಮದ ಪ್ರಕಾರ ಹೆಕ್ಟರೆಗೆ 13,500 ರೂ. ಜತೆಗೆ ರಾಜ್ಯ ಸರ್ಕಾರದಿಂದ 11,500 ರೂ. ಸೇರಿಸಿ 25 ಸಾವಿರ ರೂ. ಜಮಾ ಮಾಡಲಾಗುತ್ತದೆ.

ಈಗಾಗಲೆ ಚಿತ್ರದುರ್ಗ ಜಿಲ್ಲೆಯಲ್ಲಿ 2022-23ನೇ ಸಾಲಿನ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳುಗಳಲ್ಲಿ (ಮುಂಗಾರು ಹಂಗಾಮಿನಲ್ಲಿ) ಹೆಚ್ಚಿನ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ಬೆಳೆಹಾನಿ ಆಗಿದ್ದು, ಬೆಳೆ ಹಾನಿಯ ಕುರಿತು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಕೂಡಿ ಸಮೀಕ್ಷೆ ಕಾರ್ಯ ಮುಗಿಸಿದ್ದು, ಜಿಲ್ಲೆಯಾದ್ಯಂತ ಒಟ್ಟು 71158.47 ಹೆಕ್ಟೇರ್‍ಗಳಷ್ಟು ಕೃಷಿ ಬೆಳೆ ಹಾನಿಯಾಗಿರುವುದಾಗಿ‌ ವರದಿ ನೀಡಿದೆ.
ಚಿತ್ರದುರ್ಗ ಜಿಲ್ಲೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 15 ರವರೆಗೆ 5 ಹಂತವಾಗಿ‌ ಚಿತ್ರದುರ್ಗ ಜಿಲ್ಲೆಯ, ಚಿತ್ರದುರ್ಗ ತಾಲ್ಲೂಕಿನ 23,778 ರೈತರ ಖಾತೆಗಳಿಗೆ ರೂ. 34.54 ಕೋಟಿ, ಚಳ್ಳಕೆರೆ ತಾಲ್ಲೂಕಿನ 1569 ರೈತ ಫಲಾನುಭವಿಗಳ ಖಾತೆಗಳಿಗೆ ರೂ. 3.52 ಕೋಟಿ, ಮೊಳಕಾಲ್ಮೂರು ತಾಲ್ಲೂಕಿನ 501 ರೈತ ಖಾತೆಗಳಿಗೆ ರೂ.0.74 ಕೋಟಿ, ಹಿರಿಯೂರು ತಾಲ್ಲೂಕಿನ 19619 ರೈತ ಫಲಾನುಭವಿಗಳ ಖಾತೆಗಳಿಗೆ ರೂ.28.95 ಕೋಟಿ, ಹೊಳಲ್ಕೆರೆ ತಾಲ್ಲೂಕಿನ 21745 ರೈತ ಫಲಾನುಭವಿಗಳ ಖಾತೆಗಳಿಗೆ ರೂ.26.57 ಕೋಟಿ ಹಾಗೂ ಹೊಸದುರ್ಗ ತಾಲ್ಲೂಕಿನ 6408 ರೈತ ಫಲಾನುಭವಿಗಳ ಖಾತೆಗಳಿಗೆ ರೂ.4.98 ಕೋಟಿ ಸೇರಿದಂತೆ ಜಿಲ್ಲೆಯಿಂದ ಒಟ್ಟು 99.23 ಕೋಟಿಗಳಷ್ಟು ಬೆಳೆ ಪರಿಹಾರದ ಮೊತ್ತ ನೇರ ನಗದು ವರ್ಗಾವಣೆ ಮುಖಾತರ ಜಮೆಯಾಗಿರುತ್ತದೆ.
ಉಳಿದ ಫಲಾನುಭವಿ‌ ರೈತಮಿತ್ರರಿಗೆ‌‌‌ ಅತಿ ಶೀಘ್ರದಲ್ಲಿ ಹಂತ ಹಂತವಾಗಿ ಹಣ ರೈತರ ಖಾತೆಗೆ ತಲುಪುವ ಹಾಗೆ ಮಾಡಲಾಗುತ್ತದೆ. ಮುಂದುವರೆದು ಅಕ್ಟೋಬರ್ ಮಾಹೆಯಲ್ಲಿ (ಹಿಂಗಾರು ಹಂಗಾಮಿನಲ್ಲಿ) ಬಿದ್ದಂತಹ ಹೆಚ್ಚಿನ ಪ್ರಮಾಣ ದ ಮಳೆಯಿಂದಾಗಿ ಜಿಲ್ಲೆಯಿಂದ ಒಟ್ಟು 49,162.20 ಹೆಕ್ಟೇರಷ್ಟು ಕೃಷಿ ಬೆಳೆ ಹಾನಿಯಾಗಿರುವುದರ ಕುರಿತು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಕ್ರುಷಿ ಸಚಿವರಾದ ಬಿ. ಎಸ್. ಪಾಟೀಲ ರವರು ಈಗಾಗಲೇ ಅತಿವೃಷ್ಟಿ , ಅನಾವೃಷ್ಟಿ ಇಂದ ಆಗುವ ಬೆಳೆ ಹಾನಿ ಪರಿಹಾರಕ್ಕೆ‌ ಎಲ್ಲಿ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂದು ತಮ್ಮ‌ ಟ್ವಿಟ್ ಮುಖಾಂತರ ತಿಳಿಸಿರಿವರು . ಅತಿವೃಷ್ಟಿಯಿಂದ ರೈತ ಬೆಳೆಹಾನಿ ಹಾಗು ಮನೆ ಕುಸಿತ ಹಾಗು ಮುಂತಾದ ತೊಂದರೆಗಳನ್ನು ಅನುಭವಿಸುತ್ತಿದ್ದಾನೆ. ಹೀಗೆ ಅರ್ಜಿ ಸಲ್ಲಿಸಿದ ರೈತರಿಗೆ ಪರಿಹಾರ ಧನದ ಸ್ಟೇಟಸ್ ಅನ್ನು ಪರಿಶಿಲನೆ ಮಾಡಲು ಸಹಾಯ ಮಾಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ.

ಅದೆ ರೀತಿಯಾಗಿ ಕರ್ನಾಟಕ ರೈತ ಸಾಲ ಮನ್ನಾ ಪಟ್ಟಿ, ಬ್ಯಾಂಕ್‌ಗಳಿಗೆ / ಪಿಎಸಿಎಸ್‌ಗಾಗಿ ನಾಗರಿಕ ಪಾವತಿ ಪ್ರಮಾಣಪತ್ರ, ಪಾವತಿ ಮತ್ತು ಸಾಲದ ಸ್ಥಿತಿಗತಿ ವರದಿ ಅಧಿಕೃತ ವೆಬ್‌ಸೈಟ್ ಅಲ್ಲಿ ಲಭ್ಯವಿದೆ. ಈಗ ಕರ್ನಾಟಕ ಸರ್ಕಾರದಿಂದ ಬಿಡುಗಡೆಯಾದ ಫಲಾನುಭವಿಗಳ ಬೆಳೆ ಸಾಲ ಮನ್ನಾ ಯೋಜನೆ ಪಟ್ಟಿಯಲ್ಲಿ ಯಾವುದೇ ರೈತರು ತಮ್ಮ ಹೆಸರನ್ನು ಕಾಣಬಹುದು. ಸಂಪೂರ್ಣ ಪಾವತಿ ಮತ್ತು ಸಾಲದ ಸ್ಥಿತಿ ವರದಿ ಈ ವೆಬ್ ಸೈಟ್ಗಳಲ್ಲಿ ಲಭ್ಯವಿರುತ್ತದೆ ಮತ್ತು ಆಧಾರ್ ಸಂಖ್ಯೆ ಮತ್ತು ಪಡಿತರ ಚೀಟಿಯ ಸಂಖ್ಯೆಯನ್ನು ಬಳಸಿ ರೈತ ಪರಿಶೀಲಿನೆ‌ ಮಾಡಬಹುದು. ಸಾಲದ ವಿವರಗಳು, ಬ್ಯಾಂಕ್ ಪಾವತಿ ವಿವರಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಾಲದ ವಿವರಗಳನ್ನು ಒಳಗೊಂಡಿರುತ್ತದೆ ಮತ್ತು ಡೌನ್ಲೋಡ್ ಮಾಡುವ ಆಯ್ಕೆ ಕೂಡ ಲಭ್ಯವಿರುತ್ತದೆ. ಈ ಯೋಜನೆಯು ಡಿಸೆಂಬರ್ ೨೦೧೮ ರಲ್ಲಿ ಜಾರಿಗೆ ಬಂದಿತು. ಇದನ್ನು ಆದರಿಸಿ ಮಾತನಾಡಿದ ಮುಖ್ಯಮಂತ್ರಿಗಳು ರಾಜ್ಯದ ಎಲ್ಲ ನಿವಾಸಿಗಳ ಸಾಲ ಮನ್ನಾ ಮಾಡುವುದರಾಗಿ ಭರವಸೆ ನೀಡಿದರು. ಕರ್ನಾಟಕ ಬೆಳೆ ಸಾಲ ಮನ್ನಾ ಯೋಜನೆ :
ಸಾಲ ಮನ್ನಾ ಯೋಜನೆಯು ಭಾರತದಲ್ಲಿನ ಪ್ರಯೋಜನಗಳ ಒಂದು ದೊಡ್ಡ ಭಾಗವಾಗಿದೆ. ಅನೇಕ ರಾಜ್ಯಗಳು ಇತ್ತೀಚೆಗೆ ತಮ್ಮದೇ ಆದ ಸಾಲ ಮನ್ನಾ ಯೋಜನೆಗಳನ್ನು ಪ್ರಾರಂಭಿಸಿವೆ ಮತ್ತು ಇದು ದೇಶದ ರೈತರಿಗೆ ಪ್ರಯೋಜನವನ್ನು ನೀಡುತ್ತವೆ. ಈಗ, ಕರ್ನಾಟಕ ಸರ್ಕಾರವು ಸಾಲ ಮನ್ನಾ ಯೋಜನೆಯನ್ನು ಪ್ರಾರಂಭಿಸಿದೆ. ಅದು ರಾಜ್ಯದ ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಅವರ ತಲೆಯ ಮೇಲಿನ ಹೆಚ್ಚುವರಿ ಸಾಲವನ್ನು ಅಳಿಸಿಹಾಕುತ್ತದೆ. ಯೋಜನೆಯ ಅನುಷ್ಠಾನದ ಮೂಲಕ, ಕರ್ನಾಟಕ ರಾಜ್ಯದ ಎಲ್ಲಾ ರೈತರಿಗೆ ಸಹಕಾರಿಯಾಗಿದೆ.

ಇದೆ ರೀತಿ ತಮಿಳುನಾಡಿನಲ್ಲಿ ಕೂಡ 16 ಲಕ್ಷಕ್ಕೂ ಅಧಿಕ ರೈತರ ಕೃಷಿ ಸಾಲಗಳನ್ನು ಮನ್ನಾ ಮಾಡುವುದಾಗಿ ಎಐಎಡಿಎಂಕೆ ಸರ್ಕಾರ ನಿರ್ದಾರ ಮಾಡಿದೆ . ಸಹಕಾರಿ ಬ್ಯಾಂಕುಗಳಿಂದ ರೈತರು ಪಡೆದ ಒಟ್ಟು 12,110 ಕೋಟಿ ರೂ ಮೊತ್ತದ ಕೃಷಿ ಸಾಲಗಳನ್ನು ಮನ್ನಾ ಮಾಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಇ. ಪಳನಿಸ್ವಾಮಿ ಅವರು ವಿಧಾನಸಭೆಯಲ್ಲಿ ಶುಕ್ರವಾರ ತಿಳಿಸಿದರು. ಕೊರೊನಾ ವೈರಸ್ ಪಿಡುಗು, ಎರಡು ಸತತ ಚಂಡಮಾರುತಗಳು ಹಾಗೂ ಅಕಾಲಿಕ ಮಳೆಯ ಕಾರಣಗಳಿಂದ ರೈತರ ಬದುಕು ಕಠಿಣವಾಗಿದ್ದು, ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಅವರು ಕೃಷಿಯಲ್ಲಿ ಪುನಶ್ಚೇತನ ಕಂಡುಕೊಳ್ಳಲು ಸಹಾಯ ಮಾಡುವುದು ಮುಖ್ಯವಾಗಿದೆ ಎಂದು ಪಳನಿಸ್ವಾಮಿ ಹೇಳಿದರು.63
ಸಾಲಮನ್ನಾ ತಕ್ಷಣದಿಂದಲೇ ಜಾರಿಯಾಗಲಿದ್ದು, ಸರ್ಕಾರದ ಖಜಾನೆಗಾಗಿ ಅದಕ್ಕೆ ಅಗತ್ಯವಾದ ಅನುದಾನವನ್ನು ತೆಗೆದಿರಿಸಲಾಗುವುದು ಎಂದು ತಿಳಿಸಿದರು. ಭರವಸೆಗಳನ್ನು ಈಡೇರಿಸುವ ಪಕ್ಷವೆಂದರೆ ಎಐಎಡಿಎಂಕೆ ಮಾತ್ರ. ಮತ್ತಷ್ಟು ಹೊಸ ಕಲ್ಯಾಣಕ್ರಮಗಳನ್ನು ಸರ್ಕಾರ ಜಾರಿಗೊಳಿಸಲಿದೆ ಎಂದರು.ಒಂದೆರಡು ತಿಂಗಳಿನಲ್ಲಿಯೇ ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲೇ ಕೃಷಿ ವಲಯದ ಮತಗಳನ್ನು ಒಲಿಸಿಕೊಳ್ಳಲು ಎಐಡಿಎಂಕೆ ಕೃಷಿ ಸಾಲದ ಕ್ರಮ ತೆಗೆದುಕೊಂಡಿದೆ.

ಕರ್ನಾಟಕ ಬೆಳೆ ಸಾಲ ಮನ್ನಾ ಸ್ಥಿತಿಯ ಪ್ರಯೋಜನಗಳು ಈ ಯೋಜನೆಯನ್ನು ಈ ಹಿಂದೆ ಡಿಸೆಂಬರ್ 2018 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಹೀಗಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಅವರು ರಾಜ್ಯದ ನಿವಾಸಿಗಳಿಗೆ ಯೋಜನೆಯನ್ನು ಜಾರಿಗೊಳಿಸಿದ ತಕ್ಷಣ ಅವರ ಸಾಲಗಳನ್ನು ಸ್ವೈಪ್ ಮಾಡಲಾಗುವುದು ಎಂದು ಭರವಸೆ ನೀಡಿದರು. ಇದೀಗ 1 ವರ್ಷದ ನಂತರ ಕರ್ನಾಟಕ ಸಾಲ ಮನ್ನಾ ಯೋಜನೆಯ ಫಲಾನುಭವಿಗಳ ಪಟ್ಟಿ ಅಂತಿಮವಾಗಿ ಹೊರಬಿದ್ದಿದ್ದು, ಸಂಬಂಧಪಟ್ಟ ಅಧಿಕಾರಿಗಳು ರೈತರ ಸಾಲ ಮನ್ನಾ ಮಾಡಿದ್ದಾರೆ. ಈ ಯೋಜನೆಯ ಮುಖ್ಯ ಪ್ರಯೋಜನವೆಂದರೆ ಈ ಹಿಂದೆ ರೈತರ ತಲೆಯ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು.
ಕರ್ನಾಟಕ ಬೆಳೆ ಸಾಲ ಮನ್ನಾ ಯೋಜನೆ  ಮುಖ್ಯಾಂಶಗಳು
ಯೋಜನೆಯ ಹೆಸರು:ಕರ್ನಾಟಕ ಬೆಳೆ ಸಾಲ ಮನ್ನಾ ಯೋಜನೆ. ಪ್ರಾರಂಭವಾದ ದಿನಾಂಕ:17ನೇ ಡಿಸೆಂಬರ್ 2018 ರಿಂದ ಪ್ರಾರಂಭಿಸಲಾಗಿದೆ.ಯೋಜನೆಯ ಫಲಾನುಭವಿ:ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರು
ಪ್ರಯೋಜನ: 2 ಲಕ್ಷದವರೆಗಿನ ಬೆಳೆ ಸಾಲ ಮನ್ನಾ
ಕರ್ನಾಟಕ ಬೆಳೆ ಸಾಲ ಮನ್ನಾ ಯೋಜನೆ ಅಡಿಯಲ್ಲಿನ ಘಟಕಗಳು. ಕರ್ನಾಟಕ ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಕೈಗೊಳ್ಳುವ ಸಂಬಂಧಿತ ಅಧಿಕಾರಿಗಳು ಪ್ರತ್ಯೇಕ ಮತ್ತು ಗೊತ್ತುಪಡಿಸಿದ ಪೋರ್ಟಲ್ ಅನ್ನು ಪ್ರಾರಂಭಿಸಿದ್ದಾರೆ . ಅಧಿಕೃತ ವೆಬ್‌ಸೈಟ್ ಫಲಾನುಭವಿಗಳು ಮತ್ತು ಅಧಿಕಾರಿಗಳಿಗೆ ಬಳಸಲು ಕೆಳಗಿನ ನಾಲ್ಕು ಆಯ್ಕೆಗಳನ್ನು ಹೊಂದಿದೆ:-
ವಾಣಿಜ್ಯ ಬ್ಯಾಂಕ್‌ಗಾಗಿ
ಬ್ಯಾಂಕ್ ಡಿಯೋ ಲಾಗಿನ್
Clws ಬ್ಯಾಂಕ್ ವರದಿಗಳು
ಬ್ಯಾಂಕ್ ಮ್ಯಾನೇಜರ್ ಲಾಗಿನ್
ಬ್ಯಾಂಕ್ fsd ಲಾಗಿನ್ ಜಿಲ್ಲಾವಾರು
ಶಾಖೆವಾರು ಬೆಳೆ ಸಾಲ ಮನ್ನಾ ಪಾವತಿ ಪ್ರಮಾಣಪತ್ರ
ಸಹಕಾರಿ ಬ್ಯಾಂಕ್‌ಗಾಗಿ
ಪ್ಯಾಕ್ಸ್ ಡಿಯೋ ಲಾಗಿನ್
ಡಿಸಿಸಿ ತಾಲೂಕು ವ್ಯವಸ್ಥಾಪಕ ಲಾಗಿನ್
ತಾಲೂಕು ಸಿಡಿಒ ಲಾಗಿನ್
Clws pacs ವರದಿಗಳು
Pacs fsd ಲಾಗಿನ್ ಜಿಲ್ಲಾವಾರು
ಆರ್ಕ್ಸ್ ಲಾಗಿನ್
Pacs wise ಬೆಳೆ ಸಾಲ ಮನ್ನಾ ಪಾವತಿ ಪ್ರಮಾಣಪತ್ರ
ನಾಗರಿಕರಿಗೆ ವೈಯಕ್ತಿಕ ಸಾಲಗಾರ ವರದಿ ಪ್ಯಾಕ್‌ಗಳಿಗೆ ನಾಗರಿಕ ಪಾವತಿ ಪ್ರಮಾಣಪತ್ರ ಬ್ಯಾಂಕುಗಳಿಗೆ ನಾಗರಿಕ ಪಾವತಿ ಪ್ರಮಾಣಪತ್ರ126
ನಾಡಕಚೇರಿಗೆ
ಬ್ಯಾಂಕ್ fsd ಲಾಗಿನ್ ಜಿಲ್ಲಾವಾರು
ಪ್ಯಾಕ್‌ಗಳಿಗೆ ನಾಗರಿಕ ಪಾವತಿ ಪ್ರಮಾಣಪತ್ರ
ಬ್ಯಾಂಕುಗಳಿಗೆ ನಾಗರಿಕ ಪಾವತಿ ಪ್ರಮಾಣಪತ್ರ
ತಾಲೂಕು ಮಟ್ಟದ ಸಮಿತಿಗೆ ಸೇವೆಗಳು
pacs ಹೊಂದಿಕೆಯಾಗದ ಪರಿಶೀಲನೆ ಲಾಗಿನ್
TLC fsd ಲಾಗಿನ್
ತಾಲೂಕು ಮಟ್ಟದ ಬ್ಯಾಂಕ್ ಹೊಂದಿಕೆಯಾಗದ ಪರಿಶೀಲನೆ ಲಾಗಿನ್
TLC ಪ್ಯಾಕ್ಸ್ ಹೊಂದಿಕೆಯಾಗದ ವರದಿಗ

Leave a Reply

Your email address will not be published. Required fields are marked *